Monday, June 22, 2009

ಪ್ರಶ್ನೆ, ಜಿಜ್ಞಾಸೆ - ಪುನರಾವರ್ತನೆ

ಓದುವ ವಯಸ್ಸಿನಲ್ಲಿ, ಪಠ್ಯ ಪುಸ್ತಕದಲ್ಲಿ ಇದ್ದಿದ್ದನ್ನ ಓದಿ, ಸ್ವಲ್ಪ ಮಟ್ಟಿಗೆ ತಿಳಿದು, ಮುಂದೆ ನಾನೇ ಆರಿಸಿಕೊಂಡ ಕ್ಷೇತ್ರದಲ್ಲಿ ಕಾಲಿಟ್ಟು, BE ಮುಗಿಸಿ ಇಷ್ಟಾ ಪಟ್ಟು ಸೇರಿದ ವೃತ್ತಿಯಲ್ಲಿ ನನ್ನ ಮೆದುಳನ್ನು ಪೂರ್ಣವಾಗಿ ಉಪಯೋಗಿಸಿದೆ. ಈಗ ಸ್ವಲ್ಪ ಸೆಟ್ಟೆಲ ಆದ ನಂತರ, ವೃತ್ತಿಯಲ್ಲದೆ ಬೇರೆಯ ವಿಷಯಗಳಲ್ಲೂ ಆಸಕ್ತಿ ಜಿಜ್ಞಾಸೆ ಹುಟ್ಟಿಕೊಳ್ಳುತ್ತಿದೆ. ಆಹಾ ... ಇದರ ಬಗ್ಗೆ ನಾನು ಮುಂಚೆಯೇ ಯಾಕೆ ತಿಳಿದುಕೊಳ್ಳಲು ಪ್ರಯತ್ನ ಮಾಡಲಿಲ್ಲ ಎಂದು ಯೋಚಿಸಿದಾಗ, ನನಗೆ ಅನಿಸಿದ್ದು ಹೀಗೆ.

ನಮಗೆ ಹೊಟ್ಟೆ ಕಾಲಿಯಾಗಿರಬೀಕಾದರೆ ಮಾತ್ರವೇ ಯೇನಾದರೂ ತಿನ್ನಬೇಕೆನಿಸುತ್ತದೆ. ಹೊಟ್ಟೆ ತುಂಬಿದ ನಂತರ ಬೇರೆ ವಿಷಯಗಳ ಯೋಚನೆ. ಹಾಗೆಯೇ, ಹಲವು ವರುಷಗಳಿಂದ ನನ್ನ ಮೆದುಳು technical ವಿಷಯಗಳ ಕೊರತೆಯಿಂದಾಗಿ ಅದರ ಬಗ್ಗೆಯೇ ಚಿಂತನೆ, ಇದನ್ನು ಪರಿಹರಿಸಿಕೊಳ್ಳುವ ಉತ್ಸಾಹ. ಈಗ ಇಂತಹ ವಿಷಯಗಳಿಂದ ನನ್ನ ಮೆದುಳು ತುಂಬಿ, ಬೇರೆ ಬೇರೆ ವಿಷಗಳ ಬಗ್ಗೆ ಜಿಜ್ಞಾಸೆ ಹುಟ್ಟಿಕೊಳ್ಳುತ್ತಿದೆ. ಇಂತಹ ಜಿಜ್ಞಾಸೆಯಿಂದ ಹುಟ್ಟುವ ಪ್ರಶ್ನೆಗಳೇ ಜ್ಞಾನಮಾರ್ಗದ ಮೊದಲನೆಯ ಮೈಲುಗಲ್ಲು ಎಂದು ನನ್ನ ಅಭಿಪ್ರಾಯ. ಈ ಪ್ರಶ್ನಾ ಪ್ರವೃತ್ತಿಯ ಬಗ್ಗೆಯೇ ಜಿಜ್ಞಾಸೆ ಉಂಟಾಗಿ ಅದರ ಬಗ್ಗೆ ತಿಳಿದದ್ದು ಹೀಗಿದೆ.

ಪ್ರಶ್ನೆ ಕೇಳುವುದು ಮನುಷ್ಯನ ಮನಸ್ಸಿನ ಮೂಲ ಪ್ರವೃತ್ತಿ. ಇದನ್ನು ಹತ್ತಿಕ್ಕುವುದು ಒಂದು ವಿಧವಾದ ಆತ್ಮಹತ್ಯೆಯೇ. ಮಾನವನು ಕೀಳುವ ಪ್ರಶ್ನೆಗಳಿಗೆಲ್ಲ ಉತ್ತರ ಸಿಕ್ಕಿಲ್ಲ. ಹಾಗೆಂದು ಅದನ್ನು ಬಿಡುವಂತೆಯೂ ಇಲ್ಲ. ಅಲ್ಲದೆ ಎಲ್ಲರಿಗೂ ಹೀಗೆ ಪ್ರಶ್ನೆ ಕೇಳುವುದರಲ್ಲಿ ರುಚಿ ಉಂಟಾಗಲಾರದು. ಎಲ್ಲಿಯೋ ಸಾವಿರದಲ್ಲಿ ಒಬ್ಬನು ಸಿದ್ದಿಗಾಗಿ ಹಂಬಲಿಸುತ್ತಾನೆಂದೂ, ಅಂತಹ ಸಾವಿರದಲ್ಲಿ ಎಲ್ಲೋ ಒಬ್ಬನಿಗೆ ಸಿದ್ಧಿಯಾಗಬಹುದೆಂದೂ ಬಗವಂತನೇ ಗೀತೆಯಲ್ಲಿ ಹೇಳಿದ್ದಾನೆ (VII-3). ಆದುದರಿಂದ ಸಮಂಜಸವಾದ ಪ್ರಶ್ನೆಗಳನ್ನು ಕೇಳುವುದು ಮಹಾತ್ಕಾರ್ಯವೇ ಸರಿ. ಭಾರತೀಯ ತತ್ತ್ವಶಾಸ್ತ್ರದಲ್ಲಿ ಈ ಪ್ರವೃತ್ತಿಗೆ ಬಹಳ ಗೌರವವಾದ ಸ್ಥಾನವಿದೆ. ಪ್ರಶ್ನೆ ಮಾಡದವನಿಗೆ ತತ್ತ್ವೋಪದೇಶ ಮಾಡಕೂಡದೆಂದೂ, ಪ್ರಶ್ನೆ ಸರಿಯಾದ ಕ್ರಮದಲ್ಲಿ ಮಾಡದವನಿಗೆ ಹೀಳಕೂಡದೆಂದೂ ಮನುಸ್ಮೃತಿಯಲ್ಲಿ ಹೇಳಿದೆ. ಒಂದು ಇಡೀ ಉಪನಿಷತ್ತಿಗೆ ಹೆಸರು "ಪ್ರಶ್ನೋಪನಿಶತ" ಎಂದಿದೆ.

ಆದರೆ ಕೆಲವರು ಪ್ರಶ್ನೆ ಕೇಳುವ ಪ್ರವೃತ್ತಿಯೇ ತಪ್ಪೆಂದು ಹೇಳುತ್ತಾರೆ. ಜ್ಞಾನವನ್ನು ಮೌನ ಮಾರ್ಗದಿಂದಲೂ ಸಾಧಿಸಬಹುದೆಂದೂ ತಿಳಿದಿರುವುದು ದುರ್ದೈವದ ಸಂಗತಿ. ಪ್ರಶ್ನೆ ಕೇಳುವುದು ಒಂದು ವಿಧವಾದ ಅಗ್ನಿಯನ್ನು ಹೊತ್ತಿಸಿದಂತೆ. ಇಂದು ಕೇಳುವ ಪ್ರಶ್ನೆಗೆ ಇಂದೇ ಉತ್ತರ ಸಿಗಲಿಲ್ಲವೆಂದು ಈ ಅಗ್ನಿಯನ್ನೇ ಆರಿಸತಕ್ಕದ್ದಲ್ಲ. ಅಗ್ನಿಯು ದೀಪ್ತವಾಗಿದ್ದರೆ ತನಗೆ ತಾನೇ ಬೆಳಕಾಗಿ ಉತ್ತರವೂ ಕಾಲಾಂತರದಲ್ಲಿ ದೊರೆಯುವುದು. ಆದ್ದರಿಂದ ಪ್ರಶ್ನೆ ಕೇಳುವ ಪ್ರವೃತ್ತಿಯನ್ನು ಬಿಡಬೇಡಿ.

Tuesday, June 16, 2009

ಪ್ರತಿಪದೆಯ ಚಂದ್ರ ರೇಖೆ

ಇದೇ ತಿಂಗಳ ೫ದನೆ ತಾರೀಕು ಜ್ಯೇಷ್ಥ ಶುದ್ದ ತ್ರಯೋದಶಿ. ನಾವೆಲ್ಲರೂ ಸ್ಮರಿಸಬೇಕಾದ ದಿನ. ಇದೇ ಜ್ಯೇಷ್ಠ ಶುದ್ದ ತ್ರಯೋದಶಿಯಂದು ಜೂನ್ ೬ನೇ ತಾರೀಕು ೧೬೭೪ ಇಸವಿಯಲ್ಲಿ ಛತ್ರಪತಿ ಶಿವಾಜಿಯು ಹಿಂದೂ ಸ್ವರಾಜ್ಯವನ್ನು ಸ್ಥಾಪಿಸಿದನು. ವಿಜಯನಗರದ ಸಾಮ್ರಾಜ್ಯದ ನಂತರ ಮೊಟ್ಟ ಮೊದಲನೆಯದಾಗಿ ಹಿಂದವಿ ಸ್ವರಾಜ್ಯ ಉದಯವಾಯಿತು. ಇದು ಬರಿ ಮಹಾರಾಷ್ಟ್ರಕ್ಕೆ ಸೀಮಿತವಾದುದಲ್ಲ, ಇಡೀ ಭಾರತಕ್ಕೆ ಅನ್ವಯಿಸುವುದು. ಬನ್ನಿ ಇವತ್ತು ಶಿವಾಜಿ ಮಹಾರಾಜರ ಆಳ್ವಿಕೆಯ ರಾಜಮುದ್ರೆಯನ್ನು ಸ್ಮರಿಸೋಣ.


ಪ್ರತಿಪಚ್ಚಂದ್ರ ರೇಖೇವ ವರ್ಧಿಷ್ನುರ್ವಿಶ್ವ ವಂದಿತಾ
ಶಾಹು ಸೂನೋ ಶಿವಸೈ ಷಾ ಮುದ್ರಾ ಭದ್ರಾಯ ರಾಜತೆ


ಶಿವಾಜಿಗೆ ಸಂಸ್ಕೃತದ ಮೇಲೆ ಇದ್ದ ಗೌರವ ಅಪಾರ. ಇದರ ಅರ್ಥ ಹೀಗಿದೆ. ಶುಕ್ಲ ಪಕ್ಷದ ಪ್ರತಿಪದೆಯ ಚಂದಿರನ ರೇಖೆಯಂತೆ, ತಂದೆ ಶಾಹಾಜಿ ಮಹಾರಾಜರ ಪುತ್ರ ಶಿವಾಜಿ ದಿನಂಪ್ರತಿ ಬೆಳೆಯುತ್ತಾ ಹೋಗುತ್ತಾನೆ. ಸ್ವರಾಜ್ಯವು ಸಮೃದ್ಧಿಯಾಗಿ ಚಂದ್ರನಂತೆ ಹೊಳೆಯುತ್ತದೆ. ವಿಶ್ವವಂದಿತವಾಗುತ್ತದೆ. ಇದೇ ಸಿದ್ಧಾಂತದ ಮೇಲೆ ಸ್ವರಾಜ್ಯದ ಜನತೆಯ ಮನೆ ಮಂದಿರಗಳಲ್ಲಿ ಭದ್ರವಾಗಿ ಮೂಡಿದ ಮುದ್ರೆ ಇದು.


ಇಂತಹ ಚಂದ್ರ ರೇಖೆ ಮತ್ತೆ ಕಾಣಿಸಬಾರದೇ?

ಆಧಾರ: ಡಾ. ರಂಗನಾಥ ಶಿಂಡೆ, ವಿಕ್ರಮ ವಾರಪತ್ರಿಕೆ, ಜೂನ್ ೭ ೨೦೦೯

Thursday, June 11, 2009

ಪ್ರಚಂಡ ಪಾಣಿನಿ

ಭಾರತದ ಅತೀ ಪುರಾತನವಾದ ಭಾಷೆ ಸಂಸ್ಕೃತ. ಆದರೆ ಇಂದಿನ ದಿನಗಳಲ್ಲಿ, ("ಸಂಸ್ಕೃತ ಭಾರತಿ" ಸಂಸ್ಥೆಗೆ ಜೂಡಿಸಿಕೊಂಡಿರುವವರನ್ನು ಬಿಟ್ಟರೆ) ಅದನ್ನು ಕೇಳುವವರಿಲ್ಲ. ಸಂಸ್ಕೃತ ಕಲಿಯಲು ಆಸಕ್ತಿ ಇರುವುದಿಲ್ಲ, ಆಸಕ್ತಿ ಇದ್ದರೂ ಸಮಯ ಇರುವುದಿಲ್ಲ, ಸಮಯ ಇದ್ದರೂ ಅದನ್ನು ಹೇಳಿಕೊಡುವವರು ಸಿಗೋದಿಲ್ಲ, ಎಲ್ಲಾ ಸೌಕರ್ಯಗಳೂ ಒದಗಿ ಬಂದರೂ, ಸಂಸ್ಕೃತದಿಂದ ಏನು ಪ್ರಯೋಜನ, ಎಂದು ಕೇಳುವವರೇ ಹೆಚ್ಚು. ಸಂಸ್ಕೃತ ಇಲ್ಲದೆಯೇ ಸಂಸ್ಕೃತಿ ಪೂರ್ಣವಾದೀತೇ?


ಅದು ಬಿಡಿ. ಈ "ಐಟೀ" ಯುಗದಲ್ಲಿ "ಕಂಪ್ಯೂಟರ್" ಇಲ್ಲದೆಯೇ ಕೆಲಸ ನಡೆಯದು. ಸಂಸ್ಕೃತ ಭಾಷೆ "ಕಂಪ್ಯೂಟರ್"ಗೆ ಬಹಳ ಸೂಕ್ತ ಎಂದು ಹೇಳುವುದುಂಟು. ಈ ಬ್ಲಾಗು, ಅದು ಯಾಕೆ? ಎಂದು ತಿಳಿಸುವ ಪ್ರಯತ್ನ.


"ಕಂಪ್ಯೂಟರ್"ಗೆ ಸ್ವಜ್ಞಾನ ಇರುವುದಿಲ್ಲ. ಅದನ್ನು ನಾವು "ಪ್ರೋಗ್ರಾಂ" ಮಾಡಬೇಕು. "ಪ್ರೋಗ್ರಾಂ" ಅದಕ್ಕೆ ಅರ್ಥವಾಗುವ ಭಾಷೆಯಲ್ಲಿ ಬರಿಯಬೀಕು. ಕಂಪ್ಯೂಟರ್ನಲ್ಲಿ ಅದನ್ನು ಓಡಿಸುವ ಮುಂಚೆ ಆ "ಪ್ರೋಗ್ರಾಂ"ಅನ್ನು compile ಮಾಡಬೇಕು. ಈ compilerಗೆ ಆ ಭಾಷೆಯ ವ್ಯಾಕರಣ ಅಸಂಧಿಗ್ದ (non-ambiguous) ರೀತಿಯಲ್ಲಿ ತಿಳಿದಿರಬೇಕು. ಅದಕ್ಕೆ ಆಂಗ್ಲ ಭಾಷೆಯಲ್ಲಿ "context free grammer" ಎಂದು ಹೇಳುವರು. ಒಂದು ಉದಾಹರಣೆ ಕೆಳಗೆ ನೋಡಿ.


ಆಂಗ್ಲ ಭಾಷೆಯಲ್ಲಿ ಈ ೨ ವಾಕ್ಯಗಳನ್ನೂ ನೋಡಿ.


Fruit flies like apple (ಒಂದು ಮಾದರಿಯ ಹಾರುವ ಹುಳಕ್ಕೆ ಸೇಬಿನ ಹಣ್ಣು ಇಷ್ಟ)

Time flies like arrows (ಸಮಯವು ಬಾಣದಂತೆ ಹಾರಿಹೋಗುತ್ತದೆ)


ಆಂಗ್ಲ ಭಾಷೆಯ ವ್ಯಾಕರಣದ ಜೊತೆ, ಈ ವಾಕ್ಯಗಳನ್ನು "ಕಂಪ್ಯೂಟರ್"ಗೆ feed ಮಾಡಿದಾಗ, "Fruit flies" ಇರುವ ಹಾಗೆ "time flies" ಕೂಡ ಒಂದು ಬಗೆಯ ಹಾರುವ ಹುಳ ಎಂದು "ಕಂಪ್ಯೂಟರ್" ಭಾವಿಸುವಿದು. ಯಾಕೆಂದರೆ, flies ಎಂಬ ಶಬ್ದದ ಅರ್ಥವು ಆ ಸಂದರ್ಬಕ್ಕೆ (context) ಸೀಮಿತವಾಗಿ ಬದಲಾಗುತ್ತದೆ. ಇದನ್ನು ನಮ್ಮ ಕಂಪ್ಯೂಟರ್ ಅರಿಯುವುದಿಲ್ಲ. ಆದ್ಧರಿಂದ ಆಂಗ್ಲ ಭಾಷೆ "ಕಂಪ್ಯೂಟರ್"ಗಳಿಗೆ ಸೂಕ್ತವಲ್ಲ. Simple.


ಸಂಸ್ಕೃತದಲ್ಲಿ ಈ ರೀತಿಯ ವಾಕ್ಯಗಳು ಇರುವುದಿಲ್ಲ. ಇಂತಹ ಸಂಧಿಗ್ದಾರ್ಥ (ambiguity) ರೂಪದಲ್ಲಿ ವಾಕ್ಯಗಳನ್ನು ಬಳಸಲು ಪಾಣಿನಿಯ "ಅಷ್ಟಾಧ್ಯಾಯಿ"ಯ ಸೂತ್ರಗಳು ಬಿಡುವುದಿಲ್ಲ. ಮೇಲೆ ತೋರಿಸಿದ ಆಂಗ್ಲ ವಾಕ್ಯಗಳಲ್ಲಿ flies ಎಂಬ ಪದವು ನಾಮಪದವೂ ಆಗಿರಬಹುದು ಅಥವಾ ಕ್ರಿಯಾಪದವೂ ಆಗಿರಬಹುದು (ಸಂದರ್ಬಕ್ಕೆ ತಕ್ಕಂತೆ). ಆದರೆ ಸಂಸ್ಕೃತದಲ್ಲಿ ಇದು ಸಾದ್ಯವಿಲ್ಲ. ನಾಮಪದ ಶಬ್ದಗಳು "ಸುಪ್" ಪ್ರತ್ಯಯಗಳ ಜೊತೆ ಸೇರಿ ಒಂದು ರೂಪ ತಾಳುತ್ತದೆ. ಕ್ರಿಯಾಪದದ ಧಾತುಗಳು "ತಿನ್ಗ್" ಪ್ರತ್ಯಯಗಳ ಜೊತೆ ಸೇರಿ ಬೇರೆಯೇ ರೂಪ ತಾಳುತ್ತದೆ. ಆದ್ದರಿಂದ ಪಾಣಿನಿಯ ಅಷ್ಟಾಧ್ಯಾಯಿಯ ಮೂಲಕ ವರ್ಣಿಸಲ್ಪಟ್ಟ ಸಂಸ್ಕೃತ ವ್ಯಾಕರಣವು ಪ್ರಪಂಚದ ಮೊದಲನೆಯ "context free grammer" ಎಂಬ ಸಂಶಯವೇ ಬೇಡ.


ಅಷ್ತಾಧ್ಯಾಯಿಯು ಸುಮಾರು ೪೦೦೦ ಸೂತ್ರಗಳನ್ನು ಹೊಂದಿದೆ. ಸಂಸ್ಕೃತದಲ್ಲಿ ಬಳಕೆಯಾಗುವಂತಹ ಎಲ್ಲಾ ಅಂಶಗಳೂ ಇದರ ಆದಾರದ ಮೇಲೆಯೇ ನಡೆಯಬೇಕು. ಇಲ್ಲದಿದ್ದರೆ ಅದು "gramatically incorrect". ಪ್ರಪಂಚದ ಯಾವುದೇ ನಾಮಪದವಾದರೂ ಅದು ವಿಭಕ್ತಿ ಪ್ರತ್ಯಯಗಳ (ಉ, ಅನ್ನು, ಇಂದ ...) ಜೊತೆ ಸೇರಿ ಯಾವ ಯಾವ ರೂಪ ತಾಳುವುದು, ಕ್ರಿಯಾಪದಗಳ ರೂಪಗಳು ಯಾವ ಯಾವ ಕಾಲದಲ್ಲಿ ಹೇಗಿರಬೇಕು, ಸಂಧಿ-ಸಮಾಸ ಗಳ ವಿವರ, ವಾಕ್ಯಗಳಲ್ಲಿನ ಛಂದಸ್ಸು, ಅಲಂಕಾರ ಎಲ್ಲವೂ ಕೇವಲ ೨೦೦೦ ಸೂತ್ರಗಳಲ್ಲಿ ತಿಳಿಸಿದೆ. ಎಂಥಹ ತಲೆ ಸ್ವಾಮೀ ಈ ಪಾಣಿನಿಯದು.


ನಿಮಗೆ ಗೊತ್ತೇ? ಅಷ್ತಾಧ್ಯಾಯಿಯಲ್ಲಿ ಯಾವ ಯಾವ ಅಕ್ಷರಗಳು ಶರೀರದ ಯಾವ ಯಾವ ಬಾಗದಿಂದ ಉತ್ಪತ್ತಿ ಆಗುವುದೆಂದು ತಿಳಿಸಿದೆ. ಉದಾಹರಣೆಗೆ "ಅಕುಹವಿಸರ್ಜನೀಯಾನಾಂ ಕಂಠಃ" ಎಂದರೆ ಅ, ಕ-ವರ್ಗ, ಹ ಅಕ್ಷರಗಳು ಕಂಠದಿಂದ ಉತ್ಪತ್ತಿಯಾಗುತ್ತದೆ. ಎಷ್ಟು ಸುಲಭ ಅಲ್ವೇ ಇದು? ನೀವೂ ಯಾಕೆ ಸಂಸ್ಕೃತವನ್ನು ಕಲಿಯಬಾರದು?